೨೦೦೮-೦೯ ರಲ್ಲಿ ಯಶಸ್ವೀ ‘ಗಜ ಚಿತ್ರ ನಿರ್ಮಿಸಿದ ನಿರ್ಮಾಪಕರಾದ ಡಿ.ಸುರೇಶ್ ಗೌಡ, ಪಿ.ಎಸ್. ಶ್ರೀನಿವಾಸ ಮೂರ್ತಿ, ಶ್ರೀ ಸೀತಾಭೈರವೇಶ್ವರ ಪ್ರೊಡಕ್ಷನ್ಸ್ ಲಾಂಚನದಡಿಯಲ್ಲಿ ಮತ್ತೊಂದು ಅದ್ದೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದರ್ಶನ್ ನಾಯಕನಾಗಿರುವ ಈ ಚಿತ್ರವು ದರ್ಶನ್ ಹುಟ್ಟು ಹಬ್ಬದ ದಿನವಾದ ಫೆಬ್ರವರಿ ೧೬ ರಂದು ಸೆಟ್ ಏರಲಿದೆ. ಗಜ ನಿರ್ದೇಶನದ ಕೆ. ಮಾದೇಶ್ ಈ ಚಿತ್ರದ ನಿರ್ದೇಶಕರು. ಹರಿಕೃಷ್ಣ ರವರ ಸಂಗೀತ ಈ ಚಿತ್ರಕ್ಕೆ ಇದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಭರದಿಂದ ಸಾಗಿದೆ.